Saturday, October 31, 2009

ಕವಿವನದಲ್ಲಿ ಕಾವ್ಯ ಕಲರವ






ಇತ್ತೀಚೆಗೆ ಚನ್ನಪಟ್ಟಣ ತಾಲ್ಲೂಕು ಭೂಹಳ್ಳಿಯಲ್ಲಿ ಉಪನ್ಯಾಸಕ ಮತ್ತು ಕವಿ ಭೂಹಳ್ಳಿ ಪುಟ್ಟಸ್ವಾಮಿಯವರು ಪರಿಸರ ಪ್ರೀತಿಯಿಂದ ಅಭಿವೃದ್ಧಿಪಡಿಸಿರುವ ಮತ್ತು ಅವರೇ ಕವಿವನ ಎಂದು ಹೆಸರಿಸಿರುವ ಗುಂಡು ತೋಪಿನಲ್ಲಿ ರಾಮನಗರ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತು "ಕವಿವನದಲ್ಲಿ ಕಾವ್ಯ ಕಲರವ" ಎಂಬ ಕವಿಗೋಷ್ಠಿಯನ್ನು ಆಯೋಜಿಸಿತ್ತು.ಬೆಂಗಳೂರಿನ ಕವಿ ನಾಟಕಕಾರ ಎಲ್.ಎನ್.ಮುಕುಂದರಾಜ್,ರೇವಣ್ಣಾರಾಧ್ಯ,ವಡ್ಡಗೆರೆ ನಾಗರಾಜಯ್ಯ,ಕವಿವನದ ನಿರ್ಮಾತೃ ಭೂಹಳ್ಳಿ ಪುಟ್ಟಸ್ವಾಮಿ,ಜಾನಪದಲೋಕದ ಸರಸವಾಣಿ,ಉಪನ್ಯಾಸಕಿ ಟಿ.ಪದ್ಮ,ಪತ್ರಕರ್ತೆ ಸುಜಾತ ಕುಮುಟ,ನಾಟಕ ನಿರ್ದೇಶಕ ದೊಡ್ಡಬಳ್ಳಾಪುರದ ಟಿ.ಎಚ್.ಲವಕುಮಾರ್,ದೇವರಾಜು,ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ ಪ್ರೊ.ಎಂ.ಶಿವನಂಜಯ್ಯ ಮುಂತಾದವರು ತಮ್ಮ ಸ್ವರಚಿತ ಮತ್ತು ಕನ್ನಡದ ಸುಪ್ರಸಿದ್ಡ ಕವಿಗಳ ಕವನಗಳನ್ನೂ ವಾಚಿಸಿದರು.
ಹಳ್ಳಿಗಳ ಬದುಕಿನ ಅನುಭವವೇ ಇಲ್ಲದ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ರಾಷ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿ ಪ್ರಕೃತಿಯ ಬೆಡಗು ಬೆರಗುಗಳನ್ನು ಕಣ್ತುಂಬಿಸಿಕೊಂಡರು.ಹಳ್ಳಿಗರೂ ಉತ್ಸಾಹದಿಂದ ಪಾಲುಗೊಂಡರು.ಹುರಿದ ಕಡಲೆ ಕಾಯಿ ಬೆಲ್ಲ ಸವಿಯುತ್ತ, ಬೆಲ್ಲದ ಬಿಸಿ ಟೀ ಸೇವಿಸುತ್ತ ಸಂಜೆಯ ಸರಾಗದಲ್ಲಿ ಸುಂದರ ಸ್ವಪ್ನಲೋಕದಲ್ಲಿ ಕಾಲದ ಹಂಗಿಲ್ಲದೆ ನಲಿದರು.ಈ ಸುಂದರ ಸಂಜೆಯ ಚಿತ್ರಗಳನ್ನು ನಿಮಗೆ ನೀಡುತ್ತಿದ್ದೇನೆ.

No comments: